ಒಳಗೆ ಇಳಿದು ಬಾ

ಒಳಗೆ ಇಳಿದು ಬಾ ಇಳಿಯುವಂತೆ ನೀ
ಮಳೆಯು ಮಣ್ಣ ತಳಕೆ

ಕೆಸರ ಮಡಿಲಿಂದ ಕೆಂಪನೆ ಕಮಲವ
ಮೇಲೆತ್ತುವ ಘನವೇ
ಹೂವಿನ ಎದೆಯಲಿ ಬಗೆಬಗೆ ಪರಿಮಳ
ಬಿತ್ತುವಂಥ ಮನವೇ
ನಿಂತ ಗಿರಿಗಳಿಗೆ ನಡೆಯುವ ನದಿಗಳ
ಕರುಣಿಸುವಾ ಒಲವೇ
ಆನೆ ಅಳಿಲುಗಳ ಅಂತರವೆಣಿಸದೆ
ತಾಳುವಂಥ ನೆಲವೇ

ಸೂರ್ಯಚಂದ್ರರನು ಸರದಿ ಕಾವಲಿಗೆ
ನೇಮಿಸಿದಾ ಧಣಿಯೇ
ನೀಲಿನಭದಲ್ಲಿ ನಿತ್ಯವು ಜ್ವಲಿಸುವ
ನಕ್ಷತ್ರದ ಗಣಿಯೇ
ಗಾಳಿಯ ಕರೆಸಿ ಮೋಡದ ಮುಚ್ಚಳ
ತೆರೆದು ಸರಿವ ಕರವೇ
ಬಾನಿನ ತುಂಬ ಬೆಳಕಿನ ಕವಿತೆಯ
ಹಾಡುವಂಥ ಕೊರಳೇ!

ತರ್ಕಬುದ್ಧಿಗಳ ಬಲೆಯ ಜಾಲಕ್ಕೆ
ಸಿಕ್ಕದ ಧೋರಣೆಯೇ
ಭಾವನೆಯಲ್ಲಿ ಮಿಂಚಿ ಮೈದೋರಿ
ಹರಿಯುವ ಪ್ರೇರಣೆಯೇ
ವಿಶ್ಚಕ್ಕೇ ಪ್ರಭುವಾಗಿಯು ಪೀಠವ
ಬಯಸದಂಥ ನಿಲುವೇ
ಸ್ನೇಹ ಕರುಣೆ ವಾತ್ಸಲ್ಯ ಗಂಗೆಗೆ
ತವರೆನಿಸಿದ ಒಲವೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೩೧
Next post ಹೊಸ ಸೂರ್ಯನುದಯಕೆ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys